ಸಾಧು ಸಂತರ ಭೂಮಿಯನ್ನು ಕಬಳಿಸುವ ಹುನ್ನಾರ ಫಲಿಸುವುದಿಲ್ಲಾ:-ನವೀನ್ ಗುಳಗಣ್ಣವರ್

ಶುಕ್ರವಾರದಂದು ಗುದ್ನೇಪ್ಪನಮಠದ ಸರ್ವೆ ನಂಬರ್ 78ರ ಮಠದ ಜಮೀನಿನ ಉಳಿವಿಗಾಗಿ ಗುದ್ನೇಪ್ಪನಮಠದಿಂದ ಕುಕನೂರು ಡಾ.ಬಿರ್.ಅಂಬೇಡ್ಕರ್ ವೃತ್ತದ ಮೂಲಕ ವೀರಭದ್ರಪ್ಪ ವೃತ್ತದವರೆಗೂ ಹಮ್ಮಿಕೊಂಡ ಶಾಂತಿಯುತ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಗುದ್ನೇಪ್ಪನಮಠದಲ್ಲಿ ಈಗಾಗಲೇ ಸಾಕಷ್ಟು ಭೂಮಿ ಶಿಕ್ಷಣ ಸಂಸ್ಥೆಗಳಿಗೆ ತೆಗೆದುಕೊಂಡಿದ್ದು, ಜಾತ್ರೆಗೆ ಉಳಿದ ಅಲ್ಪ ಸ್ವಲ್ಪ ಭೂಮಿಯನ್ನು ಉಳಿಸಿಕೊಳ್ಳಲು ಹೋದರೇ ಆ ಭೂಮಿಯನ್ನು ಶಾಸಕರು ಕಬಳಿಸುವ ಹುನ್ನಾರಾ ನಡೆಸಿದ್ದು, ಸಾಧು ಸಂತರ ಭೂಮಿಯನ್ನು ಕಬಳಿಸುವ ಹುನ್ನಾರು ಫಲಿಸುವುದಿಲ್ಲಾ.ಈ ಪ್ರಕ್ರಿಯೆ ಇದೇ ತರನಾಗಿ ಮುಂದುವರೆದರೆ ಎಲ್ಲದಕ್ಕೂ ಮಠದ ಸದ್ಭಕ್ತರು ಸಿದ್ಧರಿದ್ದೇವೆ ಎಂದು ಹೇಳಿದರು.
ವಕೀಲರು ಹಾಗೂ ಜಂಗಮ ಸಮಾಜದ ಮುಖಂಡರು ಆದ ತಿಪ್ಪೇರುದ್ರ ಸ್ವಾಮಿ ಮಾತನಾಡಿಇಲ್ಲಿನ ದೇವಸ್ಥಾನದ ಇತಿಹಾಸವನ್ನು ಬೇಕಿದ್ದರೇ ರಾಯರಡ್ಡಿಯವರೇ ಒಮ್ಮೆ ಓದಿಕೊಳ್ಳಿ, ಇದೇನು ಯಾರಪ್ಪನ ಮನೆಯ ಸ್ವತ್ತು ಅಲ್ಲಾ, ಇದು ದೇವಸ್ಥಾನದ ಜಾಗೆಯಾಗಿದ್ದು, ಈ ಮೊದಲು ಇಲ್ಲಿ ನವೋದಯಶಾಲೆ, ಕೆಎಲ್ಇ ಕಾಲೇಜ್, ಐಟಿಐ ಕಾಲೇಜು, ಮೊರಾರ್ಜಿ ವಸತಿ ಶಾಲೆ ಸೇರಿದಂತೆ ಕುಡಿಯುವ ನೀರಿನ ಟ್ಯಾಂಕ್ ಗಾಗಿ ಸಾಕಷ್ಟು ಭೂಮಿಯನ್ನು ಪಡೆದುಕೊಂಡಿದ್ದಿರಿ. ಇನ್ನೂ ಇಲ್ಲಿನ ಜಾತ್ರೆಗೆ ಉಳಿದಿರುವ ಅಲ್ಪ ಸ್ವಲ್ಪ ಭೂಮಿಯನ್ನು ಕಬಳಿಸಲು ಹೊರಟ್ಟಿದ್ದಿರಲ್ಲಾ ಇದು ನ್ಯಾಯವೇ ಎಂದು ಪ್ರಶ್ನಿಸಿದರು.

ಈ ಜಾತ್ರೆಗೆ ಸರಕಾರವೇನು ನಯಾ ಪೈಸೆ ಕೊಡಲ್ಲಾ, ಇಲ್ಲಿನ ಹುಣಸೆ ಮರದ ಹುಣೆಸೆ ಹಣ್ಣಿನಿಂದ ಜಾತ್ರೆ ನಡೆಯುತ್ತದೆ. ಆದರೆ ಇಲ್ಲಿನ ಶಾಲೆಯ ಸೆಸ್ ಹಾಗೂ ಹುಣಸೆ ಹಣ್ಣಿನ ಆದಾಯದ ಲೆಕ್ಕ ಪತ್ರ ಹಾಗೂ ಹುಂಡಿ ಹಣದ ಲೆಕ್ಕವನ್ನು ಇಲ್ಲಿಯವರೆಗೆ ಇಲ್ಲಿನ ಆಡಳಿತದವರು ನೀಡಿಲ್ಲಾ ಎಂದರೇ ಇದನ್ನು ಯಾರಿಗೆ ನೀಡುತ್ತಿದ್ದಾರೆ ಎಂದು ಪ್ರಶ್ನೀಸಿದರು.
ಈಗಿರುವ ಜಾಗೆಯೇ ಜಾತ್ರೆಗೆ ಸಾಲದಾಗಿರುವಾಗ ಇಲ್ಲಿಯೇ ಸರಕಾರಿ ಕಟ್ಟಡ ಕಟ್ಟುತ್ತೇನೆ ಎಂದು ಹಟಕ್ಕೆ ಬಿದ್ದಿರುವ ರಾಯರಡ್ಡಿ ಪದೇ ಪದೇ ಅಧಿಕಾರಿಗಳನ್ನ ಕಳಿಸಿ ಇಲ್ಲಿನ ಭೂಮಿಯನ್ನು ಒತ್ತಾಯ ಪೂರ್ವಕವಾಗಿ ಪಡೆಯಲು ಹೊರಟಿರುವ ನಡೆ ಸರಿಯಲ್ಲಾ, ನಿಮ್ಮ ನಡೆಗೆ ಬೆಸತ್ತ ಜನ ನ್ಯಾಯಾಲಯದಿಂದ ತಡೆ ತಂದರೂ ಕೂಡಾ ಜಿಲ್ಲಾಧಿಕಾರಿ, ಆಡಳಿತಾಧಿಕಾರಿ, ಪೋಲಿಸ್ ಇಲಾಖೆಯವರು ಇಂತಹ ಚೆಲಾಗಳ ಮಾತು ಕೇಳಿ ತೊಂದರೆ ಕೊಡುತ್ತಿದ್ದಾರೆ.
ನ್ಯಾಯಾಲಯ ಆದೇಶ ಉಲ್ಲಂಘನೆ ಯಾರು ಮಾಡುತ್ತಾರೋ ಅಂತವರ ವಿರುದ್ದ ನಾವು ಹೈಕೋರ್ಟ್ ನಲ್ಲಿ ಗುಂಡಿ ಬಿಚ್ಚಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಂವಿಧಾನ ಉಲ್ಲಂಘಿಸಿದ ನಿಮಗೆ ನಿಮ್ಮ ಶಾಸಕ ಸ್ಥಾನವನ್ನು ಕಳಚಿಸುವುದು ನಮಗೆ ಗೊತ್ತಿದೆ. ಈ ಜಾಗೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುತ್ತದೆ ಎಂದು ಹೇಳುತ್ತಿದ್ದಿರಲ್ಲಾ ದಾಖಲೆಗಳಿದ್ದರೆ ತಂದು ತೋರಿಸಿ ಎಂದು ಸವಾಲು ಹಾಕಿದರು.
ಮಾರುತಿ ಗೌರಾಳ ಮಾತನಾಡಿ ತಾಲೂಕ ಆಡಳಿತಾತ್ಮಕ ಹಿತ ದೃಷ್ಟಿಯಿಂದ ತಾಲೂಕ ಆಡಳಿತ ಕಚೇರಿಗಳು ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಭವನ ಕೋಟು ತಾಲೂಕ ಕ್ರೀಡಾಂಗಣ ನಿರ್ಮಾಣಕ್ಕಾಗಿ ಹೋರಾಟ ಮಾಡುತ್ತಿರುವುದು ಸ್ವಾಗತ ಅರ್ಹ ಆದರೆ ಇವುಗಳನ್ನೆಲ್ಲ ನಿರ್ಮಾಣ ಮಾಡಲು ಕುಕುನೂರು ಪಟ್ಟಣದ ಐತಿಹಾಸಿಕ ಪರಂಪರೆಯುಳ್ಳ ಸಾವಿರಾರು ವರ್ಷಗಳ ಇತಿಹಾಸವಿರುವ ಶ್ರೀಗುದ್ನೇಪ್ಪನ ಆಸ್ತಿ ಸರ್ವೆ ನಂಬರ್ 78 ರಲ್ಲಿ ಆಗಬೇಕು ಎಂದು ಪಟ್ಟ ಬದ್ಧ ರಾಜಕಾರಣಿಗಳು ಮತ್ತು ಸರ್ಕಾರ ಹೇಳುತ್ತಿರುವುದು ಖಂಡನೀಯ.
ಜಾತ್ರೆ ಸಮಯದಲ್ಲಿ ಲಕ್ಷಗಟ್ಟಲೆ ಜನಸಾಗರ ಸೇರುವಂತಹ ಐತಿಹಾಸಿಕ ಪರಂಪರೆಯುಳ್ಳ ಪಂಚಕಳಶ ಮಹಾ ರಥೋತ್ಸವಕ್ಕೆ ಭಕ್ತ ಸಾಗರ ಹರಿದುಬರುತ್ತದೆ.
ಬರುವಂತಹ ಭಕ್ತಾದಿಗಳಿಗೆ ದೇವಸ್ಥಾನ ವತಿಯಿಂದ ಅನುಕೂಲತೆಗಳು ಇಲ್ಲ ದೇವಸ್ಥಾನದ ಅಭಿವೃದ್ಧಿಯ ಕಾಣದ ಇದೆ,
ಶ್ರೀ ಗುದ್ನೇಪ್ಪನ ಮಠವು ಜಂಗಮರು ವಾಸಿಸುತ್ತಿದ್ದು. ಈ ಹಿಂದೆನಿಂದಲೂ ಸೇವಾ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದು. ಬಡ ಕುಟುಂಬಗಳು ವಾಸವಾಗಿದ್ದು ಅವರಿಗೆ ಹೆದರಿಸಿ ಬೆದರಿಸಿ ಸರ್ವೇ ನಂಬರ್ 78 ರಲ್ಲಿ ಆಡಳಿತ ಭವನ ಕಟ್ಟುವುದು ಎಷ್ಟರಮಟ್ಟಿಗೆ ಸರಿ.
ರಾಜಕಾರಣ ಮಾಡುವವರು ಯಾವುದೇ ದೇವಸ್ಥಾನದ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳದೆ ಜೀರ್ಣೋದ್ಧಾರ ಮಾಡಬೇಕೆ ಹೊರತು ಗ್ರಾಮದ ಜನರನ್ನು ಹೆದರಿಸಿ ಅವರಿಗೆ ನೋಟಿಸು ನೀಡುವಂತಹದಲ್ಲ ಎಂದು ಮಾತನಾಡಿದರು.


ಸುರೇಶ ಬಳೂಟಗಿ ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತನಾಡಿ
ಕುಕನೂರಿನಲ್ಲಿ ಒತ್ತಾಯಪೂರ್ವಕವಾಗಿ ಶಾಲೆ,ಅಂಗಡಿ ಮುಂಗಟ್ಟು,ಸಾರಿಗೆ ವ್ಯವಸ್ಥೆ ಬಂದ್ ಮಾಡಿರುವುದು ರಾಯರೆಡ್ಡಿಯವರ ಅಸಹಾಯಕ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಕುಕನೂರು ತಾಲೂಕಿನ ಗುದ್ನೆಪ್ಪನಮಠದ ಶ್ರೀ ರುದ್ರಮುನೇಶ್ವರ ದೇವಸ್ಥಾನದ ಭೂಮಿಯಲ್ಲಿ ಸರಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡಬೇಕೆಂದು ಈ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿಯವರು ಇಂದು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಪಟ್ಟಣ ಪಂಚಾಯತನವರನ್ನು ದುರ್ಬಳಕೆ ಮಾಡಿಕೊಂಡು ಅವರ ಮೂಲಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ.ಅಲ್ಲದೆ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುವ ಹಾಗೆ ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್ ಮಾಡಿಸಿದ್ದಾರೆ.ಸಾರ್ವಜನಿಕ ಸಾರಿಗೆ ಬಂದ್ ಮಾಡಿ, ಬಡ,ಅಸಹಾಯಕ ಜನರ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದ ಇವರು ತಮ್ಮ ಹಠ ಸಾಧಿಸಲು ಇಂಥ ಕೃತ್ಯ ಎಸಗಿದ್ದು ಅವರ ಹತಾಶ ಭಾವನೆಯನ್ನು ತೋರಿಸುತ್ತಿದೆ.ಅಲ್ಲದೆ ದೇವಸ್ಥಾನದ ಉಳಿವಿಗಾಗಿ ಸಾರ್ವಜನಿಕರು ಹಮ್ಮಿಕೊಂಡಿದ್ದ ಪ್ರತಿಭಟನಾ ಹೋರಾಟವನ್ನು ಪೊಲೀಸ್ ಇಲಾಖೆಯ ಮೂಲಕ ಸೂಕ್ತ ಬಂದೋಬಸ್ತ್ ನೀಡಲು ನಮ್ಮಲ್ಲಿ ಸಿಬ್ಬಂದಿ ಇಲ್ಲ ಎಂಬ ಹಿಂಬರಹ ನೀಡಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮ ಸರಕಾರವೇ ಅಧಿಕಾರದಲ್ಲಿದ್ದು, ನೀವು ಶಾಸಕರಾಗಿದ್ದು, ವಿಷಯ ಹೈಕೋರ್ಟಿನಲ್ಲಿ ಇರುವಾಗ ಇಂಥ ನಾಟಕ ಮಾಡುವ ಅವಶ್ಯಕತೆ ಇರಲಿಲ್ಲ. ಮಾನ್ಯ ರಾಯರೆಡ್ಡಿ ಸಾಹೇಬರೇ ನಿಮಗೆ ಕಿಂಚಿತ್ತಾದರೂ ಮಾನವೀಯತೆ ಇದ್ದರೆ, ಈ ಜಾಗವನ್ನು ಬಿಟ್ಟು ಬೇರೆ ಕಡೆ ಎಲ್ಲಿಯಾದರೂ ಭೂಮಿ ಹುಡುಕಿ ಕಟ್ಟಡ ನಿರ್ಮಾಣ ಮಾಡಿ, ಅದರ ಬದಲು ಶ್ರೀ ರುದ್ರಮುನೇಶ್ವರ ದೇವಸ್ಥಾನದ ಭೂಮಿ ಕಬಳಿಸುವ ಹುನ್ನಾರ ನಡೆಸಿದರೆ ಈ ದೇವಸ್ಥಾನದ ಸದ್ಭಕ್ತರ ಕೆಂಗಣ್ಣಿಗೆ ಗುರಿಯಾಗುತ್ತೀರಿ ಎಂದು ಹೇಳಿದರು.
ನಂತರ ಮಂಜುನಾಥ ನಾಡಗೌಡ, ಮಲ್ಲನಗೌಡ ಕೋನನಗೌಡ, ಶರಣಪ್ಪ ಗುಂಗಾಡಿ, ಜಗದೀಶ ತೊಂಡಿಹಾಳ ಸೇರಿದಂತೆ ಇನ್ನಿತರರು ಮಾತನಾಡಿ ಯಾವುದೇ ಕಾರಣಕ್ಕೂ ಸೇವಾದಾರರ ಭೂಮಿಯನ್ನು ಸರಕಾರಿ ಕಟ್ಟಡಗಳಿಗೆ ಬಿಟ್ಟುಕೊಡುವುದಿಲ್ಲಾ ಎಂದರು.
ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಆಗಮಿಸಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನಿಲಗುಂದ ಮಠದ ಶ್ರೀಗಳು, ಅನ್ನದಾನೀಶ್ವರಮಠದ ಮಹಾದೇವಯ್ಯ ಸ್ವಾಮೀಜಿಗಳು ಹಾಗೂ ಕರಬಸಯ್ಯ ಬಿನ್ನಾಳ, ಜಗದೀಶ ಸೂಡಿ, ಶಿವಕುಮಾರ ನಾಗಲಾಪೂರಮಠ, ಕನಕಪ್ಪ ಬ್ಯಾಡರ್, ಸಿದ್ದು ಉಳ್ಳಾಗಡ್ಡಿ, ಮಹೇಶ ಕಲ್ಮಠ, ಜಗನ್ನಾಥ ಭೋವಿ, ಸೋಮಶೇಖರ್ ಗುಳಗಣ್ಣವರ್, ವಿನಾಯಕ ಸರಗಣಾಚಾರ, ಮಲ್ಲು ಚೌದರಿ, ಲಕ್ಷ್ಮಣ ಕಾಳಿ, ಮಹೇಶ್ವರಿ ಸಾವಳಗಿಮಠ, ಸಿದ್ದಲಿಂಗಯ್ಯ ಬಂಡಿ,
ಮಹಾಂತೇಶ್ ಹೂಗಾರ, ರಾಜು ದ್ಯಾಂಪುರ, ಶರಣಯ್ಯ ಹುಣಿಸಿಮರದ,ಚಂದ್ರು ಬಗನಾಳ, ನಾಗಪ್ಪ ಕಲ್ಮನಿ,ಸೇರಿದಂತೆ ಗುದ್ನೇಶ್ವರಮಠದ ನೂರಾರು ಭಕ್ತಾಧಿಗಳು, ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
ವರದಿ ಚನ್ನಯ್ಯ ಹಿರೇಮಠ ಕುಕನೂರು
